ಅಕ್ಷರ ಜ್ಯೋತಿ

ಅಕ್ಷರ ಜ್ಯೋತಿಯ ಬೆಳಗೋಣ ನಾವ್
ಅಕ್ಷರ ಸುಖವನು ಪಡೆಯೋಣ ||ಪ||

ಬಾಳಿನ ನೆಮ್ಮದಿ ಸುಖ ಸೌಭಾಗ್ಯದ
ಮನ್ವಂತರಕಿದು ಮೊದಲ ಪಣ
ನೂತನ ಸಮಾಜ ಕಟ್ಟೋಣ ನಾವ್
ಭವ್ಯ ಭಾರತವ ಬೆಳೆಸೋಣ ||೧||

ಅಜ್ಞಾನವೆಂಬ ಕತ್ತಲೆ ಮನೆಯಲಿ
ಕೊಳೆಯುತ ಬಾಳೋದು ಸಾಕಣ್ಣ
ಜ್ಞಾನದ ದೀಪವ ಹಚ್ಚೋಣ ನಾವ್
ಬೆಳಕಿನ ಮಕ್ಕಳು ಆಗೋಣ ||೨||

ಮೂಢ ನಂಬಿಕೆಯ ಜಡಪತಂಗಗಳು
ದೀಪದ ಉರಿಯಲಿ ಸುಡುತಾವೆ
ಹಣೆಬರವಾದದ ಕಣ್ಕಪ್ಪಡಿಗಳು
ತಂತಾವೆಲ್ಲೋ ಓಡ್ತಾವೆ ||೩||

ಅನಾರೋಗ್ಯದಾ ಹಳಸಲು ನಾತವು
ಇಲ್ಲದೆ ಮನೆ ತಿಳಿಯಾಗುವುದು
ಕೊರಡುಗಟ್ಟಿರುವ ದಾರಿದ್ರ್ಯದ ಅಂ
ಗಾಂಗಗಳಿಗೆ ಬಲವಾಗುವುದು ||೪||

ಅಕ್ಷರ ದೀಪವ ಹಚ್ಚೋಣ ಅದು
ಶಕ್ತಿಯು ಮುಕ್ತಿಯು ಎನ್ನೋಣ
ಮನೆ ಮನೆ ಊರೂರ್ ಕೇರಿಕೇರಿಗಳ
ಬೆಳಕಿನ ಲೋಕವ ಮಾಡೋಣ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪಿನಂಗಳದಲ್ಲಿ
Next post ಬೈಕ್ ಆಥವಾ ಸ್ಕೂಟರ್ : ಆಯ್ಕೆ ನಿಮ್ಮದು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys